ಶುಕ್ರವಾರ, ಡಿಸೆಂಬರ್ 17, 2010

Survival of the fittest.

Just crossing a very beautiful thick shrub forest which was also full of small rocks and big trees on a not so beautiful road we stopped. Or the sight which we saw stopped us. Standing like a rock ( or even mountain!), there was our opponent, giving first glimpse to us.

We were four of us.
 The opponent was alone.
We all were in our youths-young and energetic.
But the opponent was  looking as old as rocks and mountains.
This was my third encounter with the opponent. Having lost the first two, i had come well prepared this time with my gang! We were four-
One intelligent (Praneeth), one fittest ( Bharath), one lazy (Anthony) and one idiot (me).
But the opponent had more qualities than ours- stability, experience ( opponent had seen many people like us), age factor ( much much older than us) and even opponent was taller than us!

And the opponent's name is-
One and only SAVANDURGA!
Believed to be second largest monolith in Asia after madhugiri, it is in fact not a single hill. There are two hills namely karigudda and biligudda. The latter attracts more people due to its accessibility, where as the former is still not polluted by the people-thanks to its very thick shrub forest which avoids people.
We zeroed down to this beautiful place after considering almost all the places in the world to trek! Like many of our plans, even this got failed. So we ended up selecting this place,but once we did that trek, no regrets!

                                                            We should reach there!!

Situated near Magadi, the approach is very good except the last 3 miles. Though even now it is surrounded with forests, not so compared to good old days where it has been considered as heaven to shikaarees. This used to be the place which had plenty of leopards and bears. Even now you can find these in karigudda, if you are lucky. ( dont ask me how can it be 'lucky' to encounter a leopard or a bear in a lonely forest sorrounded by hills when you dont have an escape route!!).

                                                                      Way to go...

After reaching the foothills, not wasting much time, we were on our way up. Our aim is to reach 'nandi' idol at the top, which is the highest point here. Having visited the place earlier I became the 'guide'. Even though the 'lazy' had been here once, he opted out to guide. As usual-he was lazy.
There are marks painted on the hill to guide you up. As we began climbing, the visibility to surroundings began more clear making us view the stunning nature making us to feel we were just mere mortals infront of nature (in fact we are!). The first thing you notice when you climb for some distance and turn around is the ''Akshyapatra" of  bengalooru when it comes to supplying of drinking water-the river arkavathi. Arkavathi takes birth in Nandi hills, comes towards savandurga as if coming just to kiss its foothills, then takes a turn towards ramanagar which finally mingles with cauvery at the place called 'sangam near kanapura.

                                                                       Arkavathi
As we kept on climbing it, we were becoming exhausted sooner than we expected, which was reflecting our strength in front nature's and reducing our 'ego' by showing where we stand in front of nature.
Once you go up for around 500 meters, going past the initial rocks and shrubs, you will find the first wall of the fort. Yes! you read it right, a fort!. Right from kempegowda, tippu sulthan to cornwallis, many people have ruled here. But savandurga remains stable like- 'For men may come and men may go, but I stay on forever'. From that wall you got to climb another 300 meters, you will find a view point. That is just half way through!.

                                                                half way through....
But i was searching all the places if we are lucky enough to spot a leopard or bear. Because, live aside the  great hunter kenneth andreson, even his son has hunted around 40 leopards and a dozen sloth bears here!. But every time I searched behind the shrubs and rocks, I found only used plastic covers, bottles:(  people are finding innovative ways to pollute!.

As you go further up, you will be welcomed by a water stream, which can be drinked at your own risk!, followed by couple of old structures, remainings of the fort. Just after it, you will get the first glimpse of the 'nandi' .

                                              
                                                                 first glimpse of the nandi

Going further, you will end up yourself in thick shrub forest, where in fact you should do some adventure to move further. Expecting the bear, all i could find is beer bottle! The last stretch is more challenging, you can find yourself surrounded by many rocks and thick forest where you are expected to climb up when you are already tired! But a very nice place to play hide and seek, but we were not in the mood of playing. But once you have gone through it, your are there. That is it!
             


        praneeth  'posing' for cam                                                    
                                                                  
At last, after doing many circus we reached our destination, so it was natural to get excited.
The 'intelligent' was jumping all over, the 'fittest' was in search of food, eventually ended up eating carrot!, the 'lazy' found the place to take rest, the 'idiot' as usual did not knew what to do, so ended up doing nothing except enjoying the nature.

                                                            View from top

After reaching the top, you will get to view of karigudda!! The second hill. But there is no access from this point, you should take the different route altogether.
For all the people who know  this place- please do not come again here.
For all people who doesn't know this- Do not visit, anyhow you do not know it!
Because it has already been polluted enough. You are welcome only if you come to enjoy the nature and nothing else.
Finally i conquered it in my third attempt, my ego was boosted, but heard the hill singing-" Men may come and may go, but I stay for ever"

ಗುರುವಾರ, ಡಿಸೆಂಬರ್ 9, 2010

accident ಆಗೋಗಿದೆ...!

ಹೇಗಿರುತ್ತೆ accident ನ ಅನುಭವ?? 
ನನಗೆ ಗೊತ್ತಿರುವ ಎಲ್ಲಾ 'ಬಿದ್ದ' ಸ್ನೇಹಿತರಿಗೂ ಕೇಳಿದ್ದ, ಕೇಳುತ್ತಿರುವ ಹಾಗು ಕೇಳುವ ಪ್ರಶ್ನೆ ಅದು, ಏಕೆಂದರೆ ನನಗೆ ಅ ದಿವ್ಯನುಭಾವವಿರಲಿಲ್ಲ! ಆದರೆ ಅವರು ಕೊಟ್ಟಿದ್ದ, ಕೊಡುತ್ತಿರುವ ಹಾಗು ಕೊಡುವ ಉತ್ತರ ಥೇಟ್ ವಿಷ್ಣುವರ್ಧನ್ ಶೈಲಿಯಲ್ಲಿ-'experience cannot be explained , ಅನುಭವನ ಅನುಭವಿಸಬೇಕು' , ಒಂದು ಸಲ ಬಿದ್ರೆನೆ ಅದರ ಮಜಾ ಏನೂ ಅಂತ ತಿಳಿಯುತ್ತೆ ಅನ್ನುವ ಧಾಟಿ ಅವರದಾಗಿತ್ತು. 
ಬೀಳುವುದರಲ್ಲೂ ಅದೆಷ್ಟು ವಿಧಗಳು! 
ರಾತ್ರಿ ಹೊತ್ತು petrol bunk ಗೆ ಕಟ್ಟುವ ಹಗ್ಗಕ್ಕೆ ಗಾಡಿ ನುಗ್ಗಿಸಿ ಮುಗ್ಗರಿಸುವುದರಿಂದಾ ಹಿಡಿದು, ಹಿಡಿಯಲು ಬಂದ traffic police ಗೇ ಗುದ್ದಿ ಅವರ ಮೇಲೇ ಬೀಳುವ ಸಾಹಸಿ ಗೆಳೆಯರಿದ್ದಾರೆ ! 
12 ತಿಂಗಳಲ್ಲಿ 15 ಸಲ ತನ್ನ ಗಾಡಿಯನ್ನು ತನ್ನ ಜೊತೆಯೇ ಮಣ್ಣು ಮುಕ್ಕಿಸಿದ ಸಾಹಸಿ ಗೆಳೆಯ ಹೇಮಂತ್ ನಮ್ಮ ಗುಂಪಿನಲ್ಲೇ ಬೀಳುವುದರಲ್ಲಿ ರೆಕಾರ್ಡ್ ಮಾಡಿರುವವನು! 
ಹೀಗೆ ಬಿದ್ದವರು ಕೊಡುತ್ತಿದ್ದ ಕಾರಣಗಳೂ ಅಷ್ಟೇ ರಂಜನೀಯವಾಗಿರುತಿತ್ತು!  ನಾಯಿ ಅಡ್ಡ ಬಂತು, ಬೇರೆಯವರು ಬಂದು ಗುದ್ದಿದರು, ಕತ್ತಲಾಗಿತ್ತು....ಹೀಗೆ ಸಾಗುತ್ತದೆ ಕಾರಣಗಳು. 
ಆಗ ಬೇಡಿಕೊಂಡೆ ದೇವರನ್ನ ನಾನು- 'ದಯವಿಟ್ಟು ನಾನು ಬೀಳುವುದಕ್ಕೆ ಹೊಸ ಕಾರಣವೊಂದನ್ನ ಕರುಣಿಸು, ಅಥವಾ ಕಾರಣವೇ ಇಲ್ಲದೆ ಬೀಳಿಸು! No reasons what so ever!'.
ನನ್ನ ಬೇಡಿಕೆ ಥೇಟ್ ಹಿರಣ್ಯ ಕಶುಪುವಿನ ಬೇಡಿಕೆಯ  ಹಾಗೆಯೇ ಇತ್ತು- ನಾನು ಬೀಳುವಾಗ ಕತ್ತಲಾಗಿರಬಾರದು, ಬೆಳಗ್ಗೆಯೂ ಆಗಿರಬಾರದು; ನನಗೆ ಯಾರೂ, ಯಾವುದೂ ಗುದ್ದಬಾರದು; ನಾನು ಯಾರಿಗೂ, ಯಾವುದಕ್ಕೂ ಗುದ್ದಬಾರದು. ಒಟ್ಟಿನಲ್ಲಿ ಬೀಳಬೇಕು, ಕೇವಲ ನನ್ನ ಅಹಂಕಾರವನ್ನು ಕಮ್ಮಿ ಮಾಡಿಕೊಳ್ಳುವುದಕ್ಕೆ!
ಈ ವಿಲಕ್ಷಣ ಭಕ್ತನ ವಿಲಕ್ಷಣ ಬೇಡಿಕೆಯನ್ನ ಈಡೇರಿಸುವುದಕ್ಕೆ, ಅಂತ ಸಂಧರ್ಭವನ್ನ ಸೃಷ್ಟಿಸುವುದಕ್ಕೆ ದೇವರು ಕೆಲವು ಸಮಯ ತೆಗೆದುಕೊಂಡ. Love at the time of cholera ದ ನಾಯಕನು ನಾಯಕಿಗಿಗಾಗಿ ಕಾಯುವ ಹಾಗೆಯೇ ನನ್ನನ್ನೂ ದೇವರು ಬೀಳಿಸುವುದಕ್ಕೆ ಕಾಯಿಸಿದ! 
ಆದರೆ ಇಂದು ದೇವರು ಕಣ್ಣು ಬಿಟ್ಟ- ನಾನು ಬಿದ್ದೆ!, ನಾನು ಬಿದ್ದಾಗ-
ಬೆಳಗ್ಗೆಯಲ್ಲ, ರಾತ್ರಿಯೂ ಅಲ್ಲ-ಸಂಜೆಯಾಗಿತ್ತು!
ನಾನು ಯಾರಿಗೂ, ಯಾವುದಕ್ಕೂ ಗುದ್ದಲಿಲ್ಲ; ನನಗೂ ಯಾರೂ ಯಾವುದೂ ಗುದ್ದಲಿಲ್ಲ-ಆದರೂ ಬಿದ್ದೆ!
ಹಿಂದಿನ ಸೀಟಿನಲ್ಲಿ ಹುಡುಗಿಯೂ ಕೂತಿರಲಿಲ್ಲ, ಹಾಗಂತ ಒಂಟಿಯಾಗಿಯೂ ಇರಲಿಲ್ಲ!
ಸುಮ್ಮನೆ ಹೋಗುತ್ತಿದ್ದವನು ಬ್ರೇಕ್ ಹಾಗಿದೆ- ಕಣ್ಣು ಬಿಟ್ಟಾಗ ರಸ್ತೆಯ ಮೇಲೆ, ನನ್ನ ಗಾಡಿಯ ಜೊತೆಗೆ, ಗೆಳೆಯನ ಜೊತೆಗೆ.
ಹೇಗಿತ್ತು ಆ ಅನುಭವ?
ನಾನು ಕಣ್ಣು ಬಿಟ್ಟಾಗ-ಪ್ರಪಂಚವೆಲ್ಲಾ ತಲೆಕೆಳಗಾಗಿದೆ, ನಾನೊಬ್ಬನೇ ಸರಿಯಾಗಿದ್ದೇನೆ...ಇಲ್ಲ..ತಲೆಕೆಳಗಾದ ಕಾರು, ಬಸ್ಸು, ಓಡಾಡುವ, ನೋಡಿ ಹೋಗುವ, ನೋಡದೆಯೂ ಹೋಗುವ, ಎತ್ತುವುದ ಬಿಟ್ಟು ಬಗ್ಗಿ ನೋಡಿ ತಮ್ಮ ವಿಚಾರಧಾರೆಯನ್ನು ಹೊರಗೆಡವುವ ಬಗೆ ಬಗೆಯ ತಲೆಕೆಳಗಾದ ಮನುಷ್ಯರು...ನಾನು ಬಿದ್ದರೂ ಪ್ರಪಂಚವೇ ತಲೆಕೆಳಗಾದಿದೆ ಬಿದ್ದಿದೆ ಎಂದು ವಿಶ್ಲೇಸಿಸುವ ಒಂದು ಸದಾವಕಾಶ ನನಗೆ ಬಂದಿತ್ತು....zoo ನಲ್ಲಿ imported ಕೋತಿಯನ್ನು ಹೇಗೆ ಜನರು ಸುತ್ತುವರಿದು ನೋಡುತ್ತಾರೋ, ಹಾಗೆ ನನ್ನನ್ನೂ ನೋಡುತಿದ್ದರಿಂದ ನನಗೆ ಮುಜುಗರವಾಗಿ ಎದ್ದು ನಿಂತುಕೊಂಡೆ, ಬರೀ ತರಚಿದ ಗಾಯಗಳಾಗಿದ್ದವು. 
ಈಗ- 'ಮುಟ್ಟಿದರೆ ಮುನಿ' ತರಹ ನನಗೆ ಮೈಯಲ್ಲಿ ಎಲ್ಲಿ 'ಮುಟ್ಟಿದರೂ ಉರಿ'!

ಮಂಗಳವಾರ, ನವೆಂಬರ್ 9, 2010

ಹಾಗೆ ಸುಮ್ಮನೆ

 ಮಾಡಲು ಬೇರೆ ಏನೂ ಕೆಲಸ ತೋಚದೆ, ಕೆಲವು ಸಾಲುಗಳನ್ನು ಗೀಚಿದೆ-ಓದುವ ಕಷ್ಟ ನಿಮಗಿರಲಿ...

ಹೆಸರು:
 ಕೇಳಿದಳವಳು ನನ್ನ ಸುತ್ತಲು ತಿರುಗುವೆಯಲ್ಲಾ, ನಿನ್ನ ಹೆಸರೇನು?
ಹೇಳಿದೆ-ಅದು ಕಳೆದುಹೋಗಿದೆ, ಅದನ್ನೇ ಹುಡುಕುತ್ತಾ ಬಂದೆನೆಂದು...
ನನ್ನ ಕಡೆ ನೋಡದೆ ಕೇಳಿದಳು-ಎಲ್ಲಿ ಹುಡುಕುವೆಯೆಂದು?
ಹೇಳಿದೆ-ನಿನ್ನಲ್ಲೇ ಎಂದು, ಪ್ರೀತಿಗೆ ಹೆಸರಿನ ಹಂಗಿಲ್ಲವೆಂದು.
ತಕ್ಷಣ ಕೊಟ್ಟಳು ನನಗೊಂದು ಹೆಸರು, ಅವಳು ನನ್ನ ಪ್ರೇಮಿ..
ನನಗಿಟ್ಟ ಹೆಸರು ಚಂದ್ರ, ಅವಳು ನಾ ಸುತ್ತುವ ಭೂಮಿ.
ಅವಳಂದಳು-
ನೀನು ಚಂದ್ರ, ಪ್ರತಿ ರಾತ್ರಿ ಕಪ್ಪು ಆಕಾಶಕ್ಕೆ ದೃಷ್ಟಿ ಬೊಟ್ಟು ಇಡುವ ಪ್ರೇಮಿ..
ನಾ ಪ್ರತಿ ಇರುಳು ನಿನ್ನ ಪ್ರೀತಿಯ ಬೆಳಕಿಂದ ಹೊಳೆಯುವ ಭೂಮಿ.

ನಂಬಿಕೆ :
ಬದುಕು ಸಾಗುತಿತ್ತು, ಹಳಿಯ ಮೇಲೆಯೇ ಸಾಗುವ ರೈಲಿನ ಹಾಗೆ...
ನೀ ಬಂದೆ ದಾರಿಯಲಿ ದಿಕ್ಕು ತಪ್ಪಿಸಲು, 
ನಂಬಿಕೆಯ ಕಂಬಿಯನ್ನೇ ಕಿತ್ತೊಗೆಯುವ ಬೂಕಂಪದ ಹಾಗೆ...
ಪ್ರೀತಿಯೆಂದರೆ ಹೀಗೆ-ಮತ್ತೇರಿಸಿ ಸಾಯಿಸುವ ಸೋಮರಸದ ಹಾಗೆ.



ಕಾಲ:
ನೀನು ಚಂದ್ರನ ಹಾಗೆ,
ನಕ್ಕಾಗ ಅರ್ಧ ಚಂದ್ರ...
ಪ್ರೇಮ ಉಕ್ಕಿ ಹರಿದಾಗ ಪೂರ್ಣ ಚಂದ್ರ...
ಆದರೆ ಮುನಿಸಿಕೊಂಡರೆ ಮಾತ್ರ
ನನಗೆ ಅಮಾವಾಸ್ಯೆ, ನಿನಗೆ ಗ್ರಹಣ...
 
 

ಶನಿವಾರ, ಮೇ 29, 2010

ದೆವ್ವ ಬಂದಾಗ !!

ದೆವ್ವ!
ಹೇಗೆ ಜಗತ್ತಿನ ಪ್ರತಿಯೊಬ್ಬರೂ ದೇವರ ಬಗ್ಗೆ , ಜೀವನದ ಬಗ್ಗೆ , ಕಡೆಗೆ ಪ್ರೀತಿಯಬಗ್ಗೆಯೂ "ಇರಲಿ ನನ್ನದೊಂದು" ಅನ್ನುವ ಹಾಗೆ ಅಭಿಪ್ರಾಯ ಇಟ್ಟುಕೊಂಡಿರುತ್ತಾರೋ ಹಾಗೆಯೆ ದೆವ್ವ ಭೂತಗಳ ಬಗ್ಗೆಯೂ ಇಟ್ಟುಕೊಂಡಿರುತ್ತಾರೆ.

ಭಾರತದಲ್ಲಿ ದೇವರು ದೆವ್ವಗಳ ಬಗ್ಗೆ ಜನರು ಸ್ವತಹ ಆ ದೇವರು ದೆವ್ವಗಳಿಗೆ  ಬೇಜಾರಗೋವಷ್ಟು ಮಾತಾಡುತ್ತಾರೆ, ಚರ್ಚಿಸುತ್ತಾರೆ ಮತ್ತು ಅದು ಕೊಡುವ ಭರವಸೆ, ಭಯದಲ್ಲಿಯೇ ಜೀವಿಸುತ್ತಾರೆ. ಆ ಭರವಸೆ, ಭಯಗಳ ನಡುವೆಯೂ ನಮ್ಮಂತವರಿಗೆ ಅದರೆಡೆಗೆ ಎಂದೆಂದಿಗೂ ಬತ್ತದ ಒಂದು ವಿಸ್ಮಯ, ಬೆರಗು ಅಥವಾ ಒಂದು ನಿರ್ಲಕ್ಷ್ಯವಿರುತ್ತದೆ. ಏಕೆಂದರೆ ಭಹುಷಹ ಭಾರತದಲ್ಲಿ ಜನರು ಕೋರ್ಟು,ಸರಕಾರ,  ಕಾನೂನಿದಕ್ಕಿಂತಾ, ಯಾಕೆ ಸ್ವತಹ ತಮಗಿಂತಾ  ಹೆಚ್ಚಾಗಿ ದೇವರು, ದೆವ್ವಗಳ  ಮೇಲೆ ನಂಬಿಕೆ ಇಟ್ಟುಕೊಂಡಿರುತ್ತಾರೆ!

ನಮಗೂ ಎಸ್ಟೋ ಸಲ ಎಷ್ಟೇ ಧೈರ್ಯವಂತರಾದರೂ, ಕಡು ಕತ್ತಲ ರಾತ್ರಿಗಳಲ್ಲಿ ಒಬ್ಬರೇ ಹೋಗುತ್ತಿರುವಾಗ ಯಾರೋ ನಮ್ಮನ್ನು ಹಿಂಬಾಲಿಸುತ್ತಿರುವ ಕಲ್ಪನೆಯೊಂದು ಮೂಡಿ ನಾವು ಎಷ್ಟೇ ಪ್ರಯತ್ನ ಪಟ್ಟರೂ ಬೆನ್ನಿನಾಳದಿಂದ ಸಣ್ಣದೊಂದು ನಡುಕ ಶುರುವಾಗಿ ಮೈಯೆಲ್ಲಾ ಹಬ್ಬುತ್ತದೆ. ಅಲ್ಲಿ ಏನು ಇರದಿದ್ದರೂ ಅಕಸ್ಮಾತ್ ಏನಾದರೋ ಇದ್ದೀತೇನೋ ಎಂಬ ಆತಂಕ ನಮ್ಮನ್ನು ಆವರಿಸಿಕೊಳ್ಳುತ್ತದೆ.

ನಮ್ಮ ಮನಸ್ಸಿನೊಳಗೆ ಅದರ ಪಾಡಿಗೆ ಅದು ಮಲಗಿಕೊಂಡಿರುವ  ದೆವ್ವವನ್ನು ನಾವೇ ತಟ್ಟಿ ಎಬ್ಬಿಸಿ ಆಚೆ ಕರೆದು, ಅದಕ್ಕಿಂತಾ ಭಯಾನಕವಾಗಿ ನಾವಿದ್ದರೂ, ನಾವು ಅದನ್ನು ನೋಡಿ ಹೆದರುತ್ತೇವೆ!.

ಅವತ್ತಗಿದ್ದೂ ಅದೇ.., ನಮ್ಮ ಮನೆಯಲ್ಲಿ ನಮ್ಮ ಅಜ್ಜಿಯೋ ಯಾರೋ ತೀರಿಕೊಂಡ ದಿನವಿರಬೇಕು.
 ನಾವು ಹುಡುಗರು( ಹುಡುಗಿಯರೂ!) ಸುಮಾರು 16 ಜನ cousins, ಊಟವಾದ ಮೇಲೆ ಮಾಡಲು ಬೇರೇನೂ ಕೆಲಸವಿಲ್ಲದರಿಂದ ದೆವ್ವದ ಬಗ್ಗೆ ಮಾತಾಡುತ್ತಾ ಆಡುತ್ತಾ, ಹೆದರಿ, ಬೆದರಿ ಸರಿಯಾಗಿ ನಿದ್ದೆಯೂ ಬಾರದ ಅವಸ್ತೆ ಮಾಡಿಕೊಂಡು ಸುಮ್ಮನೆ ಮುಸುಕೆಳೆದುಕೊಂಡು ಬಿದ್ದುಕೊಂಡಿದ್ದೆವು.
 ರಾತ್ರಿ ಎಷ್ಟು ಹೊತ್ತಿಗೋ ಯಾರೋ ನಿದ್ರೆಯಲ್ಲಿದ್ದ ನನ್ನನ್ನ ತಟ್ಟುತಿರುವಂತೆ ಭಾಸವಾಯಿತು. ತಕ್ಷಣ ಎಚ್ಚರಗೊಂಡ ನಾನು ರಾತ್ರೆ ನಾವಾಡಿದ ಮಾತೆಲ್ಲ ಜ್ಞಾಪಕಬಂದು, ನನ್ನ ಮಾತು ಕೇಳಿಸಿಕೊಂಡ ಯಾವುದೋ ಕೆಲಸವಿಲ್ಲದ ದೆವ್ವ ನನ್ನನ್ನು ಹುಡುಕಿಕೊಂಡು ಇಲ್ಲಿಯತನಕ ಬಂದುಬಿಟ್ಟಿದೆ ಅಂದುಕೊಂಡೆ!  ಮನೆಮುಂದಿರುವ ತುಳಸಿಯನ್ನು ದಾಟಿಕೊಂಡು ಬಂದಿರುವ (ಆಗ ನಮಗೆ ತುಳಸಿ ಇದ್ದರೆ ಅದು ಬರುವುದಿಲ್ಲವೆಂಬ ನಂಬಿಕೆ ಇತ್ತು!) ಇದು ಯಾವುದೋ ಒಂದು ಧೈರ್ಯವಂತ ದೆವ್ವವೇ ಇರಬೇಕೆಂದುಕೊಂಡು, ತಕ್ಷಣಕ್ಕೆ ಮನಸ್ಸಿಗೆ ಬಂದ ದೇವರ ಹೆಸರನ್ನೆಲ್ಲ ಹೇಳಿಕೊಂಡು ಪ್ರಾರ್ಥಿಸುವುದಕ್ಕೆ ಪ್ರಾರಂಭಿಸಿದೆ.
ಆದರೆ ಮತ್ತೆ ಯಾರೋ ನನ್ನ ಮುಸುಕೆಳೆದ ಹಾಗೆ, ನನ್ನ ಹೆಸರು ಕರೆದ ಹಾಗೆ ಆಯಿತು. ಆಗಲಂತೂ ದೇವರ ಹೆಸರು ಹೇಳಿದ ಮೇಲೂ ಹೀಗೆ ಆಗಿದ್ದರಿಂದ ಇದು ದೇವರಿಗೂ ಹೆದರದೆ ಇರೋ ಭಂಡ ದೆವ್ವವೆಂದುಕೊಂಡು, ಇನ್ನು  ನನ್ನ ಕೆಥೆ ಮುಗಿಯಿತೆಂದುಕೊಂಡು, ಅದು ನನ್ನನ್ನು ಸಾಯಿಸುವುದಕ್ಕಿಂತಾ ಮುಂಚೆ ಅದರ ಮುಖವನ್ನಾದರೂ ನೋಡೋಣವೆಂದು ಮುಸುಕು ತೆರೆದೆ.
ಸುಂದರವಾಗಿರುವ(?) ಒಂದು ಮೋಹಿನಿಯನ್ನು ನಿರೀಕ್ಷಿಸಿದ್ದ ನಾನು ಭಯಾನಕವಾದ ನನ್ನ ತಮ್ಮನ ಮುಖ ನೋಡಿ ಬೆಚ್ಚಿಬಿದ್ದೆ. ಎದ್ದು ನೋಡಿದರೆ ಇನ್ನೂ ಒಬ್ಬ ಎದ್ದು ಕುಳಿತ್ತಿದ್ದ. ಏನು ಅಂದೆ. ನನ್ನ ತಮ್ಮನಿಗೆ ರಾತ್ರಿ ಎಚ್ಚರವಾಗಿ ಸೂಸೂಗೆ ಹೋಗಲು ಒಬ್ಬನಿಗೇ ಭಯವಾಗಿ ತನ್ನ ಪಕ್ಕದಲ್ಲಿ ಮಲಗಿರುವ ನನ್ನ ಅಣ್ಣನನ್ನು ಎಬ್ಬಿಸಿಕೊಂಡು ಹೋಗಿ 'ಕೆಲಸ' ಮುಗಿಸಿಕೊಂಡು ಮಲಗಲು ಪ್ರಯತ್ನಿಸಿದರು. ಆದರೆ ನಿದ್ರೆ ಬರಲಿಲ್ಲ, ಅದಕ್ಕೆ ನನ್ನ ನಿದ್ರೆ ಕೆಡಿಸಿದ್ದರು. ಸರಿ ಮಾತಾಡುತ್ತ ಕುಳಿತೆವು. ಸುತ್ತ ಮುತ್ತ ನೋಡಿದೆ, ಅದೇ 16 ಜನ ಬಿಟ್ಟರೆ ಬೇರೆ ಯಾರೂ ದೊಡ್ಡವರಿರಲಿಲ್ಲ. ಹಾಗಾಗಿ ಎಲ್ಲರನ್ನು ಎಬ್ಬಿಸಿಬಿಟ್ಟೆವು. ಮತ್ತೆ ನಮ್ಮ ಚರ್ಚೆಗೆ ಎಳೆದುತಂದಿದ್ದು ಅದೇ ದೆವ್ವವನ್ನ. ಅದೆಷ್ಟೋ ಹೊತ್ತು ಹಾಗೆ ಮಾತಾಡುತ್ತಾ ಕುಳಿತಿದ್ದೆವು. ಗೋಡೆಯ ಮೇಲೆ ಹೊರಗಿನ ಯಾವುದೋ ನೆರಳು ಓಡಾಡುತ್ತಿರುವಂತೆ ಭಾಸವಾಗಿ ಹೆದರಿಕೊಂಡೆ. ಆದರೆ ಸುಮ್ಮನೆ ಯಾಕೆ ಸಂಶಯ ಪಡಬೇಕೆಂದು ಎದ್ದು ಹೋಗಿ ಕಿಟಕಿಯಿಂದ ಇಣುಕಿ ನೋಡಿದೆ-

ನಕ್ಷತ್ರಗಳಿಂದ ತುಂಬಿ ತುಳುಕುತ್ತಿದ್ದ ಕಪ್ಪು ಆಕಾಶದಲ್ಲಿ ದ್ರುಷ್ಟಿಬೊಟ್ಟಿಟ್ಟಂತೆ ಪೂರ್ಣಚಂದ್ರ ಒಬ್ಬನೇ ನಗುತ್ತಾ ನಿಂತಿದ್ದ.

ಮತ್ತೆ ಬಂದು ಕುಳಿತೆ. ದೆವ್ವ ಬರೀ ಕಲ್ಪನೆ ಅನಿಸ್ತು.
ಅದನ್ನೇ ನನ್ನ ಅಣ್ಣನಿಗೆ ಹೇಳಿದೆ.
ಅದಕ್ಕವನು ದೆವ್ವವಿರುವುದು ನಿಜವಾದರೆ ಇನ್ನು ಮೂರು ಎಣೆಸದರೊಳಗಾಗಿ ಮನೆಯ ಕಾಲಿಂಗ್ ಬೆಲ್ ಶಬ್ದವಾಗುತ್ತದೆ ಎಂದ.
ತಕ್ಷಣ ನನಗೆ ಹೆದರಿಕೆಯಾಯಿತು. ಇಷ್ಟು ನೇರವಾಗಿ ದೆವ್ವದಂತಾ ದೆವ್ವಕ್ಕೆ ಸವಾಲೆಸೆಯುವುದು ಮೂರ್ಖತನ ಕೆಲಸವೆನ್ನಿಸಿ ನಿನ್ನ ನಿರ್ಧಾರವನ್ನ ಪುನರ್ವಿಮರ್ಶೆ ಮಾಡಿಕೋ  ಎಂದು ನಮ್ಮಣ್ಣನನ್ನ ಕೇಳಿಕೊಳ್ಳೋಣವೆಂದುಕೊಳ್ಳುವಷ್ಟರಲ್ಲಿ ಅವನು ಎಣೆಸಲು ಶುರುಮಾಡಿಬಿಟ್ಟಿದ್ದ...
ಒಂದು...(ಏನೂ ಸಂಭವಿಸಲಿಲ್ಲ)
ಎರಡು...(ಏನೂ ಸಂಭವಿಸಲಿಲ್ಲ)
ಮೂರು...,
ಆಗ ಹೊಡೆದುಕೊಂಡಿತು ಕಾಲಿಂಗ್ ಬೆಲ್ಲು!
 ಒಂದಲ್ಲ ಎರಡೆರಡು ಸಾರಿ!
ತನ್ನ ಪಾಡಿಗೆ ತಾನು ಅಡ್ಡಾಡುತ್ತಿದ್ದ ದೆವ್ವವೊಂದ್ಯಾವುದೋ  ನಮ್ಮ ಸವಾಲಿಗೆ ಉತ್ತರವೆಂಬಂತೆ ಬಂದೇ ಬಿಟ್ಟಿತ್ತು!.
ಮರದ ಮೇಲೆ, ಜಗತ್ತಿನೆಡೆಗೆ ಒಂದು ನಿರ್ಲಕ್ಷ್ಯವಿಟ್ಟುಕೊಂಡು ಕೂತಿರುವ ಕಾಗೆಗಳ ಗುಂಪಿಗೆ ಅನಿರೀಕ್ಷಿತವಾಗಿ ಯಾರೋ ಗುಂಡು ಹೊಡೆದರೆ ಹೇಗೆ ಚೆಲ್ಲಪಿಲ್ಲಿಯಾಗುತ್ತವೋ , ನಾವೆಲ್ಲರೂ ಹಾಗೆಯೇ ಚೆಲ್ಲಾಪಿಲ್ಲಿಯಾಗಿ ಸಿಕ್ಕ ಹೊದಿಗೆಗಳ ಎಳೆದುಕೊಂಡು ಸಿಕ್ಕ ಕಡೆಗಳಲ್ಲಿ ಬಿದ್ದುಕೊಂಡೆವು.
ಬೆಳಗ್ಗೆ ಎದ್ದಾಗ 8 ಘಂಟೆ.
ಎದ್ದು ನಮ್ಮ ತಾತನ ಬಳಿ ಹೋಗಿ ರಾತ್ರಿ ನಡೆದ ಘಟನೆಯನ್ನು ಒಂದಕ್ಕೆರಡು ಮಾಡಿ, ಈ ಮನೆಯಲ್ಲಿ ದೆವ್ವದ ಕಾಟವಿದೆ ಎಂದು ಹೇಳಿದೆವು. ಅವರು ಸ್ವಲ್ಪವೂ ವಿಚಲಿತರಾಗದೆ ಹೇಳಿದರು- ಎರಡು ಸಲ ಕಾಲಿಂಗ್ ಬೆಲ್ಲು ಹೊಡೆಯುವುದು ಐದು ಘಂಟೆಗೆ , ಮತ್ತು ಹೊಡೆಯುವಾತ ಹಾಲಿನವನು!.

ಶನಿವಾರ, ಮಾರ್ಚ್ 13, 2010

"ಮಹಿಳಾ ದಿನಾಚರಣೆಗೆ ನಾನು ಬರೆದ ಭಾಷಣ"

 ಆಕಾಶ ನೀಲಿಯಲಿ,
ಚಂದ್ರ , ತಾರೆ ತೊಟ್ಟಿಲಲ್ಲಿ,
ಬೆಳಕಾ ಇಟ್ಟು ತೂಗಿದಾಕೆ...
ನಿನಗೆ ಬೇರೆ ಹೆಸರು ಬೇಕೇ?
ಸ್ತ್ರೀ ಎಂದರೆ ಅಷ್ಟೇ ಸಾಕೆ??

ಹೀಗೆ ಇಷ್ಟು ಸುಂದರವಾಗಿ, ಇಷ್ಟು ಭಾವುಕವಾಗಿ, ಇಷ್ಟು ಅರ್ಥಪೂರ್ಣವಾಗಿ ಬರೆದವರು ನಮ್ಮ ಹೆಮ್ಮೆಯ ಕವಿ ಡಾ.ಜಿ.ಎಸ್. ಶಿವರುದ್ರಪ್ಪನವರು.

"Sure GOD created man before women. But then you always make a rough draft before the final masterpiece"

ಹೆಣ್ಣನ್ನು ಅಮ್ಮ ಅನ್ನಬೇಕ? ತಾಯಿ? ಜನನಿ? ಗೆಳತಿ? ಅಥವಾ ಬರೀ ಸ್ತ್ರೀ ಎಂದರೆ ಅಷ್ಟೇ ಸಾಕ??
ಭಾರತದಲ್ಲಿ ಹೆಣ್ಣಿಗೆ ಪೂಜ್ಯ ಸ್ಥಾನವಿದೆ. ಇಲ್ಲಿ ಹೆಣ್ಣನು ದೇವರಿಗೆ ಹೊಲಿಸುತ್ತೇವೆ, ಮತ್ತು ಅಷ್ಟೇ ಕೆತ್ತದಾಗಿಯು ನೋಡಿಕೊಳ್ಳುತ್ತೇವೆ!

ಜಗತ್ತಿನ ಎಲ್ಲಾ ಕಡೆ, ಎಲ್ಲಾ ಕಾಲದಲ್ಲೂ, ಎಲ್ಲಾ ಧರ್ಮಗಳೂ ಕಾಲ ಸರಿದಂತೆ ವಿಕಾಸವಗುತ್ತಾ ಹೋಗುತ್ತಾ ಹಳೆಯ ಕೆಟ್ಟ ಆಚರಣೆಯನ್ನೆಲ್ಲಾ ಕಿತ್ತೊಗೆದು ಹೊಸ ಕಲ್ಪನೆಗಳನ್ನ, ಹೊಸ ಅಭಿರುಚಿಗಳನ್ನ ತರುತ್ತದೆ. ಹಾಗೆ ಭಾರತದಲ್ಲಾದ ಮಹತ್ವದ ಬದಲಾವಣೆಗಳಲ್ಲಿ ವಿಧವಾ  ಪುನರ್ವಿವಾಹವೂ ಒಂದು. ಇದರ ಬಗ್ಗೆ ನಮ್ಮ ಇನ್ನೊಬ್ಬ ಹೆಮ್ಮೆಯ ಲೇಖಕ ಎಸ್.ಎಲ್.ಭ್ಯರಪ್ಪನವರು ತಮ್ಮ ಜನಪ್ರಿಯ  ಕಾದಂಬರಿ "ವಂಶವೃಕ್ಷ" ದಲ್ಲಿ ತುಂಬಾ ಚೆನ್ನಾಗಿ ಬರೆದಿದ್ದಾರೆ. ಅವರು ಹೆಣ್ಣನ್ನು ಪ್ರಕೃತಿಗೆ ಹೋಲಿಸಿದ್ದಾರೆ!
ಅವರು ಹೀಗೆ ಬರೆದಿದ್ದಾರೆ-

 "ಹೆಣ್ಣು ಪ್ರಕೃತಿ!
ಪ್ರಕೃತಿ ವಿಧವೆಯೇ?

ಚಿರನೂತನಳೂ, ಚಿರಚೀತನಳೂ ಆದ ಪ್ರಕೃತಿಗೆ ಕೃತಕ ಧರ್ಮದ ಕಟ್ಟು ಹಾಕುವುದು ಅಧರ್ಮ.
ಹೆಂಗಸನ್ನು ಅನುಭವದಿಂದ ವಂಚಿತಳನ್ನಾಗಿ ಮಾಡುವುದಕ್ಕೆ ಸಹಸ್ರ ಅಡೆತಡೆಗಳಿವೆ. ಅವೆಲ್ಲವೂ ಮನುಷ್ಯನಿಂದ ಕೃತಕವಾಗಿ ನಿರ್ಮಿತವಾದವು. ಈ ಅಡೆತಡೆಗಳಿಗೆ ಎಷ್ಟೋ ಸಲ ಹೆಂಗಸಿನ ಮೂಲ ಶಕ್ತಿಯನ್ನು ಎದರಿಸುವ  ಶಕ್ತಿ ಇಲ್ಲ. ಆಗ ಅವು ಗಂಡಸಿನ ಮನಸ್ಸನ್ನು ಹಿಡಿದು ನೂರಾರು ಭಯಭೂತಗಳನ್ನು ಬಿತ್ತುತ್ತವೆ. ನಮ್ಮ ಕೆಲವು ಸ್ವರೂಪಗಳಿಗೆ ಮೈಲಿಗೆಯ ಆರೋಪ ಹೊರಿಸಿ ಹೆಂಗಸ್ಸನ್ನು ವಂಚಿಸುವ ಪ್ರಯತ್ನ ನಡೆದೇ ಇದೆ. ಗಂಡಸರು ಹೆಂಗಸರಿಗಿಂತಾ ಎಷ್ಟಾದರೂ ದುರ್ಬಲರು.

ಅವಳ ಮೂಲ ಗುಣವೇ ಚೀತನವಾದುದು. ಪ್ರಕೃತಿಯ ಮನ ತುಂಬುವ ವನಶ್ರೀ, ಕಣ್ಣನ್ನು ಸಂತೃಪ್ತಿಗೊಳಿಸುವ ಸುಂದರ ದೃಶ್ಯಗಳು, ಚರಾಚರ ಜೀವಿಗಳಿಗೆ ಅನ್ನವೀಯುವ ಅವಳ ವಿಶಾಲ ವಿಸ್ತಾರ, ಇವುಗಳಿಗೆ ಯಾವ ಧರ್ಮವೂ ವ್ಯಧವ್ಯದ ಸೋಂಕು ತಗುಲಿಸಬಾರದು.
ಎಂದಿಗೂ ನಾವು ಕೃತಕ ಅಡೆತಡೆಗಳನ್ನು ನಂಬಿ ಅವಳನ್ನು ವಿಮುಕ್ತಳನ್ನಾಗಿಸಬಾರದು.
ವಿಮುಖತೆ ಪ್ರಕೃತಿಯ ಗುಣವಲ್ಲ!

ಪ್ರಕೃತಿಯ ಅಂದರೆ ಹೆಣ್ಣಿನ ಮೂಲ ಗುಣವನ್ನು ಕೃತಕವಾಗಿ ತಡೆಹಿಡಿಯುವ ಧರ್ಮ, ನೀತಿ, ರಾಜಶಾಸನ, ಸಮಾಜ ನಿಯಮ, ಜನತೆಯ ಆರೋಪ, ಇವೆಲ್ಲವೂ ಅಸತ್ಯದ ಮುಖಗಳು. ಹೆಣ್ಣಿನ ಸುಂದರ ಸ್ವರೂಪವನ್ನು ತುಳಿಯಲೆತ್ನಿಸುವ ಧರ್ಮವು ತನಗೆ ತಾನೇ ನಾಶವಾಗುತ್ತದೆ."

 ಭಹುಶಹ ಈ ವಿಷಯದ ಬಗ್ಗೆ ಇದಕ್ಕಿಂತಲೂ ಅರ್ಥಪೂರ್ಣವಾಗಿ ಬರೆಯಲು ಯಾರ ಕಯ್ಯಿಂದಲೂ ಕಷ್ಟವಾದೀತು.
ನಮ್ಮಲ್ಲಿರುವ ದ್ಹೌರ್ಬಲ್ಯಗಳನೆಲ್ಲಾ ಸರಿದೂಗಿಸಿ ಹೊಸ ಕಲ್ಪನೆಗಲೊಡನೆ, ಹೊಸ ಕನಸಿನೊಂದಿಗೆ ಮತ್ತೆ ಹೊಸ ಸಮಾಜವೊಂದನ್ನು ಮುಂದಿನ ಪೀಳಿಗೆಗೆ ಕಟ್ಟೋಣವೆಂದು ಕೋರುತ್ತಾ ನನ್ನ ಮಾತನ್ನು ಮುಗಿಸುತ್ತೇನೆ...

ಗುರುವಾರ, ಫೆಬ್ರವರಿ 4, 2010

ಮಾಯಾಮೃಗದ ಬೆನ್ನೇರಿ ಹೊರಟವನ ಕಥೆ..:(

  ಓಡಿಸುತಿದ್ದ ಸೈಕಲ್ ಫಕ್ಕನೆ ಹಿಡಿತ ಕಳಕೊಂಡಿತು, ಏನಾಯಿತೆಂದು ನೋಡಿದರೆ ಹಿಂದಗಡೆ ಅವನು ಸೈಕಲ್ ಮೇಲೆ ಎಗರಿ ಕುಳಿತಿದ್ದ! "ಬೇಗ ಓಡಿಸು ಕಿರಣ್"
"ಯಾಕೋ?"
"ಬೇಗ ಓಡಿಸು"
"ಅದೇ ಯಾಕೆ?"
''ಅವರು ಅಟ್ಟಿಸಿಕೊಂಡು ಬರುತಿದ್ದಾರೆ"
"ಯಾರು?"
"ಅಂಗಡಿಯವರು"
"ಯಾಕೆ?"
"ನನ್ನ ಹಿಡಿಯೋಕೆ"
"ಏನಾಯಿತು?"
"ಅವರ ಅಂಗಡಿಯ ಗಣೇಶ ಎತ್ತಿಕೊಂಡು ಬಂದಿದ್ದೀನಿ"
ಅಷ್ಟರಲ್ಲಿ ಅವರು ನಮಗಿಂತ ಕೇವಲ ೫ ಅಡಿ ಹಿಂದೆ ಇದ್ದರು, ಅದನ್ನು ಕಂಡು ಅವನು ಕೆಳಗೆ ಇಳಿದು ಓಡಿ ಬಿಟ್ಟನು..!
ಅವರು ಕೇಳಿದರು " ಅವನ ಹೆಸರೇನು?"
"v ನ" (ಹೆಸರು ಬದಲಾಯಿಸಿದೆ)
"ಸರಿ ನಿಮ್ಮ principal ಜೊತೆ ಮಾತಾಡ್ತೀನಿ, ನೀನು ಹೋಗು.."
ಅದು teachers day ಗೆ ಅಂತ ನಾವು ಕ್ಲಾಸಿನವರೆಲ್ಲ shopping ಮಾಡೋದಕ್ಕೆ ಹೋಗಿದ್ದೆವು, ಎಲ್ಲಾ ಮುಗಿಸಿ ಹಿಂತಿರುಗುತಿದ್ದಾಗ ಆದ ಘಟನೆ.
ಅವನು ಇರುತ್ತಿದುದೇ ಹಾಗೆ, ಯಾವಾಗ, ಯಾರ ಜೊತೆ ಹೇಗೆ ವರ್ತಿಸುತ್ತನೆಂದು ಊಹಿಸುವುದು ಕಷ್ಟವಾಗಿತ್ತು.
ಅವನ ಮನೆ ನಮ್ಮ ಶಾಲೆಗೆ ತುಂಬಾ ಹತ್ತಿರವಿತ್ತು, ಮತ್ತೆ ಅವನ ತಂದೆ ಪೋಲಿಸ್ ಆಗಿದ್ದರು.
ಅವನು ನಮ್ಮ ಶಾಲೆಗೆ ಬಂದು ಸೇರಿದ್ದು ನಾನು 3 ನೆ ಕ್ಲಾಸಿನಲ್ಲಿದ್ದಾಗ, ಉದ್ದಕ್ಕೆ ಎತ್ತರವಾಗಿದ್ದ ಅವನು ಕಪ್ಪಗಿದ್ದನು.
ಬಂದ ಮೊದಲ ದಿನವೇ class ಗೆ ನುಗ್ಗಿದ ಅವನಷ್ಟೇ ದಪ್ಪಗಿದ್ದ ಒಂದು ಕರಿ ಹೆಗ್ಗಣವನ್ನು ಕೇವಲ ಒಂದು ಆಟದ ಸಾಮಾನಿನಂತೆ ಅದರ ಬಾಲವನ್ನು ಹಿಡಿದೆತ್ತಿ ಆಚೆ ಬಿಸಾಕಿದ್ದ, ಮತ್ತು ನಮ್ಮೆಲ್ಲರ ಪಾಲಿಗೆ hero ಆಗಿಬಿಟ್ಟಿದ್ದ.
ಹೀಗೆ ಬಂದು ನಮ್ಮ ಗುಂಪಿಗೆ ಸೇರಿದ ಅವನು ನಮ್ಮ ಶಾಲೆಯಲ್ಲಿ ಇದ್ದಷ್ಟು ದಿನವೂ ಒಂದಿಲ್ಲೊಂದು ಗಲಾಟೆ ಮಾಡಿ ದೊಂಬಿ ಎಬ್ಬಿಸುತ್ತಿದ್ದ. ನಮ್ಮ ಕ್ಲಾಸ್ ನ ಕಿಟಕಿಗೆ ಎದುರಾಗಿ ಒಂದು carpenter ಅಂಗಡಿ ಇತ್ತು, ಇವನು ಆ ಅಂಗಡಿಯವನನ್ನು ಪರಿಚಯಿಸಿಕೊಂಡು ಅವನ ಬಳಿಯಿದ್ದ music system ನ ಸೌಂಡು ಜಾಸ್ತಿ ಮಾಡುವಂತೆ ಪುಸಲಾಯಿಸಿದ್ದ! ಸರಿ ನಮ್ಮ ಕ್ಲಾಸ್ ನ ಹುಡುಗರೆಲ್ಲ ಪಾಟವನ್ನು ಕೇಳುವುದು ಬಿಟ್ಟು ಎಲ್ಲರೂ ಕಿಟಕಿಗೆ ಕಿವಿಯೊಡ್ಡಿದರು. ಇದು ಹೇಗೋ ನಮ್ಮ ಪ್ರಿನ್ಸಿಯ ಕಿವಿಗೆ ಬಿದ್ದು ಅವನ  ಅಪ್ಪನನ್ನು ಕರೆದು ಒಂದು ದೊಡ್ಡ ಹಗರಣ ಮಾಡಿದರು....
ಅವನು ನಮ್ಮ ಕ್ಲಾಸ್ ನ ಹುಡುಗಿಯರನ್ನು ಹೆದರಿಸಲು ಜೇಬಿನಲ್ಲಿ ಜಿರಳೆಗಳನ್ನು ಹಿಡಿದು ತರುತಿದ್ದ!
ಶಾಲೆಯ ಅಟ್ಟದ ಮೇಲೆ ಕೂರುತಿದ್ದ ಪಾರಿವಾಳಗಳನ್ನು ಕಿಟಕಿಯ ಮೇಲೆ ಹತ್ತಿ ಹಿಡಿಯಲು ಪ್ರಯತ್ನಿಸಿ ನಮ್ಮನ್ನು ಚಕಿತಗೊಳಿಸುತ್ತಿದ್ದ.
ಒಂದು ಸಲ ದೀಪಾವಳಿಯ ಸಂದರ್ಭದಲ್ಲಿ ಊದುಭತ್ತಿಗೆ ಪಟಾಕಿ ಸಿಕ್ಕಿಸಿ ಕ್ಲಾಸ್ ನ tube light ಒಡೆದು ಹಾಕಿದ್ದ!!
ಮನೆಯಲ್ಲಿ ಕೋಳಿಗಳನ್ನು, ಪಾರಿವಾಳಗಳನ್ನು, ನಾಯಿಗಳನ್ನು ಸಾಕಿಕೊಂಡಿದ್ದ, ಮತ್ತು ನಮ್ಮೆಲ್ಲರನ್ನೂ ಕರೆದುಕೊಂಡು ಹೋಗಿ ಅವುಗಳನ್ನು ಪರಿಚಯಿಸಿ(!) ಅವುಗಳ ಜಾತಿ ವಿಶೇಷತೆಗಳ ಬಗ್ಗೆ ಕೊರೆಯುತ್ತಿದ್ದ.
ತನಗೆ ಗೊತ್ತಿದ್ದ ಭೂಗತ ಜಗತ್ತಿನವರ ಕಥೆಗಳನ್ನು ರಸವತ್ತಾಗಿ ನಮಗೆ ವಿವರಿಸುತ್ತಿದ್ದ. ಅಲ್ಲಿ ಆ ನಿಷಿದ್ದ, ಕತ್ತಲ, ಮೋಸದ ಜಗತ್ತಿನಲ್ಲಿ ತುಂಬಾ ದುಡ್ಡಿದೆ ಅನ್ನುತ್ತಿದ.
ಆದರೆ ಅವನ ಈ ರೀತಿಯ ಚಟುವಟಿಕೆಗಳು ಇಷ್ಟಕ್ಕೇ ಸೀಮಿತವಾಗಿರದೆ ಆ ಜಗತ್ತಿಗೂ ಕೈ ಹಾಕಿದ್ದ.
ದುಡ್ಡನ್ನು ಬಡ್ಡಿಗೆ ಬಿಟ್ಟಿದ್ದ.
ಕತ್ತಲ  ಜಗತ್ತಿನೊಳಗೆ  ಹಿಂದಿರುಗಲಾರದಷ್ಟು ದೂರ ಸಾಗಿದ್ದ.
ಒಂದು ದಿನ ಬೆಳಗ್ಗೆ ನನ್ನ ಅಮ್ಮ ನನಗೆ ದಿನ ಪತ್ರಿಕೆ ತೋರಿಸಿದರು-ಅವನು ಕೊಲೆಯಾಗಿ ಹೋಗಿದ್ದ!
ಎತ್ತರಕ್ಕೆ ಉತ್ತಮವಾಗಿ ದೇಹವನ್ನು build ಮಾಡಿಕೊಂಡು ಚಿರತೆಯಷ್ಟು ಚುರುಕಾಗಿದ್ದವನನ್ನು ನಾಲ್ಕಾರು ಜನ ಸಿನಿಮಾ ಶೈಲಿಯಲ್ಲಿ ಅಟ್ಟಿಸಿಕೊಂಡು ಹೋಗಿ ಕಣ್ಣಿಗೆ ಕಾರದ ಪುಡಿ ಎರಚಿ ಹೊಡೆದಿದ್ದರು.
ನನಗೆ ಅವನು ಕಡೆಯ ಬಾರಿ ಸಿಕ್ಕಿದ್ದಾಗ ಹೀಗೆ ಕೇಳಿದ್ದ-
" ನೀವು ಬ್ರಾಹ್ಮಣರು ಯಾಕೆ ಪ್ರಾಣಿಗಳನ್ನು ತಿನ್ನಲ್ಲ? ಹಿಂಸೆ ಅಂತಾನ? ಆದರೆ ಗಿಡ ಮರಗಳಿಗೂ ಜೀವ ಇರುತ್ತದಲ್ಲ, ಅವುಗಳನ್ನು ಮಾತ್ರ ಹೇಗೆ ತಿನ್ತೀರಾ? ಅವಕ್ಕೆ ಹಿಂಸೆ ಆಗಲ್ವಾ?"
ಅವನಿಗೆ ಉತ್ತರ ನೀಡಲು ಹೀಗೆ ಸಿದ್ದಪದಿಸಿಕೊಂಡಿದ್ದೆ-"ಜಗತ್ತಿನಲ್ಲಿ ಎಲ್ಲಾ ಸಸ್ಯಹಾರಿಗಳೂ ಮಾಮ್ಸಹಾರಿಗಳಾದರೆ ಅಥವಾ ಎಲ್ಲಾ ಮಾಮ್ಸಹಾರಿಗಳೂ ಸಸ್ಯಹಾರಿಗಳಾದರೆ ನೈಸರ್ಗಿಕ ಆಹಾರ ಕ್ರಮದಲ್ಲಿ ಅಸಮತೋಲನವಾಗುತ್ತದೆ. ಅದು ಸಾಧ್ಯವಿಲ್ಲ. ಜಗತ್ತಿನ ಪ್ರಾಕೃತಿಕ ನಿಯಮಗಳನ್ನು ಮುರಿಯಬಾರದು. ಎಲ್ಲರೂ ತಮಗಿಷ್ಟ ಬಂದಂತೆ, ತಮಗಿಷ್ಟ  ಬಂದಿದ್ದನ್ನು ತಮಗಿಷ್ಟವಾದ ಹಾಗೆ ತಿನ್ನುತ್ತಿರಬೇಕು, ತಮ್ಮಿಷ್ಟದ ಪ್ರಕಾರ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು".
ಆದರೆ ಕೇಳಿಸಿಕೊಳ್ಳಲು ಅವನೇ ಇಲ್ಲಾ...

ಬುಧವಾರ, ಜನವರಿ 6, 2010

"ನಾಳೆಯಿಂದ cricket ಆಡೋದು ಬೇಡ..!"

"ನಾಳೆಯಿಂದ cricket ಆಡೋದು ಬೇಡ..!"
ಹೀಗಂತ ಸಾವಿರ ಸರಿ ಅಂದುಕೊಂಡಿದ್ದೀವಿ, ಮತ್ತು ಅಷ್ಟು ಸಾರಿಯೂ ಯಶಸ್ವಿಯಾಗಿ ಆ ಮಾತನ್ನು ಮುರಿದಿದ್ದೀವಿ....
cricket ಒಂದು ಸಂಭ್ರಮ....ನಮ್ಮ ದ್ಯನಂದಿನ ಚಟುವಟಿಕೆಗಳಲ್ಲಿ ಒಂದಾಗಿಬಿಟ್ಟಿತ್ತು....
ಯಾಕೆಂದರೆ ಅದನ್ನು ಯಾರು ಬೇಕಾದರೂ, ಯಾರ ಜೊತೆ ಬೇಕಾದರೂ, ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ, ಹೇಗೆ ಬೇಕಾದರೂ ಆಡಬಹುದಿತ್ತು....ಅಥವಾ ನಾವು ಹಾಗಂದುಕೊಂಡಿದ್ದೆವು...(ಈಗಲೂ..!)

ಪುಸ್ತಕಗಳಲ್ಲಿ ಆಡುತಿದ್ದ book ಕ್ರಿಕೆಟ್, ಕ್ಲಾಸಲ್ಲಿ ಬೆಂಚುಗಳನ್ನು ಸರಿಸಿ ಜಾಗ ಮಾಡಿಕೊಂಡು ಆಡುತಿದ್ದ short wicket, ನಮ್ಮ ಮನೆಯ ರೂಮಿನಲ್ಲಿ, ಮನೆ ಮುಂದಿನ ಕಾರಿಡಾರ್ ನಲ್ಲಿ, ಮನೆ ಮೇಲಿನ terrace ನಲ್ಲಿ, ಮನೆ ಕೆಳಗಿನ ಶೆಡ್ ನಲ್ಲಿ, ಮನೆ ಮುಂದಿನ ರಸ್ತೆಯಲ್ಲಿ, ಪಕ್ಕದ ರಸ್ತೆಯಲ್ಲಿ, ದೊಡ್ಡ ಮೋರಿಯನ್ನು ಮುಚ್ಚಿದ್ದ bridge ಮೇಲೆ, ಚೆನ್ನಮ್ಮನಕೆರೆ, APS, ಕೃಷ್ಣ ರಾವ್ ಪಾರ್ಕ್.....ಹೀಗೆ ಇಡೀ ಜಗತ್ತನ್ನೇ ನಮ್ಮ ಕ್ರಿಕೆಟ್ ಮೈದಾನ ಮಾಡಿಕೊಂಡಿದ್ದೆವು....
ಹೇಳುವವರಿರಲಿಲ್ಲ, ಕೇಳುವವರಿರಲಿಲ್ಲ,  ಅಥವಾ ಅವರು ಹೇಳುತಿದ್ದರೂ ನಾವುಗಳು ಕೇಳುತ್ತಿರಲಿಲ್ಲ....!!

ಹೀಗಿದ್ದ ನಮ್ಮನ್ನು ಮನೆಯಲ್ಲಿ ಕೂಡಿ ಹಾಕುತ್ತಿದ್ದ ಒಂದೇ ಒಂದು ಸಂಗತಿಯೆಂದರೆ....ಮತ್ತದೇ ಕ್ರಿಕೆಟ್ಟು...!! ಭಾರತದ ಯಾವುದಾದರೊಂದು ಮ್ಯಾಚ್ ಇದ್ದರೆ ಸಾಕು ನಮ್ಮ team ನ ಎಲ್ಲರು ಯಾರಾದರೊಬ್ಬರ ಮನೆಯಲ್ಲಿ tent ಹಾಕುತಿದ್ದೆವು...ಯಾವುದೇ ವಿಮರ್ಶಕನಿಗೂ ಕಮ್ಮಿ ಇಲ್ಲದಂತೆ ಪ್ರತಿಯೊಂದು ಎಸತವನ್ನೂ ವಿಮರ್ಶೆ ಮಾಡುತ್ತಿದ್ದೆವು..., ದೀಪಾವಳಿಗೆ ತಂದಿದ್ದ ಪಟಾಕಿಯನ್ನು ಭಾರತ ಗೆಲ್ಲುವ
ಮ್ಯಾಚ್ ಗಳಿಗಾಗಿ ಎತ್ತಿಡುತ್ತಿದ್ದೆವು...ಆ ಮಟ್ಟಗಿನ  ಆಶಾಭಾವನೆಯನ್ನಾದರೂ ನಮ್ಮ ಮೇಲೆ ಕ್ರಿಕೆಟ್ ಬೀರಿತ್ತು...
ಆದರೆ ನಮ್ಮ ಕ್ರಿಕೆಟ್ ಹುಚ್ಚು ಇಷ್ಟಕ್ಕೇ ಸೀಮಿತವಾಗಿದ್ದರೆ ಚೆನ್ನಾಗಿರ್ತಿತ್ತು....ಯಾಕೆಂದರೆ ನಾವು ಎಷ್ಟೋ ಬಾರಿ ಅದನ್ನು ಅತಿರೇಕಕ್ಕೆ ಎತ್ತಿಕೊಂಡು ಹೋಗುತಿದ್ದೆವು....
ಒಂದು ಸಲ ಮನೆ ಎದುರಿದ್ದ thyagarajnagar police station  ಬೋರ್ಡ್ ಗೆ ಹೊಡೆದಿದ್ದೆವು....ಆದರೆ ಅಷ್ಟರಲ್ಲಾಗಲೇ ಅಲ್ಲಿರುವವರು ನಮಗೆ ಪರಿಚಿತರಾಗಿದ್ದರಿಂದ ನಮಗೆ ಏನು ಮಾಡಲಿಲ್ಲ...

ಮಗು ಮಲಗಿದೆ ಗಲಾಟೆ ಮಾಡಬೇಡಿ ಅಂತ ಎದುರು ಮನೆಯವರು, tution ತಗೊಳಕ್ಕೆ ಡಿಸ್ಟರ್ಬ್ ಆಗುತ್ತೆ ಅಂತ ಇನ್ನೊಬ್ಬರು, ವಯಸ್ಸಗಿರುವವರಿದ್ದಾರೆ ನೀವು ಈ ರೀತಿ ಅನಾಗರಿಕರಂತೆ ಆಡುತ್ತ ಕಿರುಚುತ್ತಿದ್ದರೆ ಅವರು heart attack ಆಗಿ ಹೋಗೇ ಬಿಡುತ್ತಾರೆ ಅಂತ ಮಿಕ್ಕವರು....ಹೀಗೆ ನಮ್ಮ ಸ್ವಾತಂತ್ರ್ಯವನ್ನು ಕಸಿದು ಕೊಳ್ಳುವುದಕ್ಕೆ ಹಲವು "ಹೊಟ್ಟೆ ಕಿಚ್ಚಿನವರು" ವಿಫಲ ಪ್ರಯತ್ನ ಆಗಾಗ ಮಾಡುತಿದ್ದರು....(ಇದರಲ್ಲಿ ನಮ್ಮ ಮನೆಯವರೂ ಇದ್ದರು!)

ಒಂದು ಬಾರಿ ನಮ್ಮ ಸನ್ಮಾನ್ಯ ಆಟಗಾರನೊಬ್ಬ( ಹೆಸರು ಹೇಳುವಂತಿಲ್ಲ!) ಆಗ ತಾನೇ ಪ್ರಚಲಿತಕ್ಕೆ ಬಂದಿದ್ದ reverse sweep ಅನ್ನು ಪ್ರಯೋಗಿಸಿದನು...ಬಾಲು ಸೀದಾ ಎದರು ಮನೆಯ ತೆರೆದ ಕಿಟಕಿಯೊಳಗೆ ಹೋಯಿತು...
ಆ ಮನೆಯವರು ನಮ್ಮನ್ನು ನೋಡುವ ಮುನ್ನ, ಅಥವಾ ಪಕ್ಕದ ಮನೆಯವರು ನೋಡುವ ಮುನ್ನ, ದಾರಿ ಹೋಕರು ನೋಡುವ ಮುನ್ನ, ನಮ್ಮ ಮನೆಯವರು ನೋಡುವ ಮುನ್ನ....ನಾವುಗಳು ಮನೆಗೆ ಓಡಿಬಿಟ್ಟೆವು...(ನಂತರ ನಮಗೆ ತಿಳಿಯಿತು ಬಾಲು ಅವರು ಮಾಡುತ್ತಿದ್ದ ಸಾರಿನಲ್ಲಿ ಬಿದ್ದಿತ್ತು...)
ನಾವಂದಿದ್ದು ಅದೇ ಮಾತು-"ನಾಳೆಯಿಂದ cricket ಆಡೋದು ಬೇಡ!"

ಈಗ ಮೊನ್ನೆ national college ground ನಲ್ಲಿ ಆಡುತ್ತಿದ್ದಾಗ, ಆಡುವ ಹುಮ್ಮಸ್ಸಿನಲ್ಲಿ ನಮ್ಮಣ್ಣ ಇನ್ನೊಬ್ಬನಿಗೆ ಡಿಕ್ಕಿ ಹೊಡೆದನು...ಮೂಗಿನಲ್ಲಿ ರಕ್ತ ಬಂತು...ನಂತರ X-ray ತೆಗೆದಾಗ ಕಂಡಿದ್ದು - ಮೂಗು ಮುರಿದಿತ್ತು...
ಆಗ ನಾವಂದು ಕೊಂಡಿದ್ದು-
"ನಾಳೆಯಿಂದ cricket ಆಡೋದು ಬೇಡ!" (ನಾಡಿದ್ದು ಭಾನುವಾರ ಆಡುತಿದ್ದೀವಿ, ನಮ್ಮಣ್ಣನನ್ನೂ ಸೇರಿಸಿಕೊಂಡು...!)