ಶನಿವಾರ, ಮಾರ್ಚ್ 13, 2010

"ಮಹಿಳಾ ದಿನಾಚರಣೆಗೆ ನಾನು ಬರೆದ ಭಾಷಣ"

 ಆಕಾಶ ನೀಲಿಯಲಿ,
ಚಂದ್ರ , ತಾರೆ ತೊಟ್ಟಿಲಲ್ಲಿ,
ಬೆಳಕಾ ಇಟ್ಟು ತೂಗಿದಾಕೆ...
ನಿನಗೆ ಬೇರೆ ಹೆಸರು ಬೇಕೇ?
ಸ್ತ್ರೀ ಎಂದರೆ ಅಷ್ಟೇ ಸಾಕೆ??

ಹೀಗೆ ಇಷ್ಟು ಸುಂದರವಾಗಿ, ಇಷ್ಟು ಭಾವುಕವಾಗಿ, ಇಷ್ಟು ಅರ್ಥಪೂರ್ಣವಾಗಿ ಬರೆದವರು ನಮ್ಮ ಹೆಮ್ಮೆಯ ಕವಿ ಡಾ.ಜಿ.ಎಸ್. ಶಿವರುದ್ರಪ್ಪನವರು.

"Sure GOD created man before women. But then you always make a rough draft before the final masterpiece"

ಹೆಣ್ಣನ್ನು ಅಮ್ಮ ಅನ್ನಬೇಕ? ತಾಯಿ? ಜನನಿ? ಗೆಳತಿ? ಅಥವಾ ಬರೀ ಸ್ತ್ರೀ ಎಂದರೆ ಅಷ್ಟೇ ಸಾಕ??
ಭಾರತದಲ್ಲಿ ಹೆಣ್ಣಿಗೆ ಪೂಜ್ಯ ಸ್ಥಾನವಿದೆ. ಇಲ್ಲಿ ಹೆಣ್ಣನು ದೇವರಿಗೆ ಹೊಲಿಸುತ್ತೇವೆ, ಮತ್ತು ಅಷ್ಟೇ ಕೆತ್ತದಾಗಿಯು ನೋಡಿಕೊಳ್ಳುತ್ತೇವೆ!

ಜಗತ್ತಿನ ಎಲ್ಲಾ ಕಡೆ, ಎಲ್ಲಾ ಕಾಲದಲ್ಲೂ, ಎಲ್ಲಾ ಧರ್ಮಗಳೂ ಕಾಲ ಸರಿದಂತೆ ವಿಕಾಸವಗುತ್ತಾ ಹೋಗುತ್ತಾ ಹಳೆಯ ಕೆಟ್ಟ ಆಚರಣೆಯನ್ನೆಲ್ಲಾ ಕಿತ್ತೊಗೆದು ಹೊಸ ಕಲ್ಪನೆಗಳನ್ನ, ಹೊಸ ಅಭಿರುಚಿಗಳನ್ನ ತರುತ್ತದೆ. ಹಾಗೆ ಭಾರತದಲ್ಲಾದ ಮಹತ್ವದ ಬದಲಾವಣೆಗಳಲ್ಲಿ ವಿಧವಾ  ಪುನರ್ವಿವಾಹವೂ ಒಂದು. ಇದರ ಬಗ್ಗೆ ನಮ್ಮ ಇನ್ನೊಬ್ಬ ಹೆಮ್ಮೆಯ ಲೇಖಕ ಎಸ್.ಎಲ್.ಭ್ಯರಪ್ಪನವರು ತಮ್ಮ ಜನಪ್ರಿಯ  ಕಾದಂಬರಿ "ವಂಶವೃಕ್ಷ" ದಲ್ಲಿ ತುಂಬಾ ಚೆನ್ನಾಗಿ ಬರೆದಿದ್ದಾರೆ. ಅವರು ಹೆಣ್ಣನ್ನು ಪ್ರಕೃತಿಗೆ ಹೋಲಿಸಿದ್ದಾರೆ!
ಅವರು ಹೀಗೆ ಬರೆದಿದ್ದಾರೆ-

 "ಹೆಣ್ಣು ಪ್ರಕೃತಿ!
ಪ್ರಕೃತಿ ವಿಧವೆಯೇ?

ಚಿರನೂತನಳೂ, ಚಿರಚೀತನಳೂ ಆದ ಪ್ರಕೃತಿಗೆ ಕೃತಕ ಧರ್ಮದ ಕಟ್ಟು ಹಾಕುವುದು ಅಧರ್ಮ.
ಹೆಂಗಸನ್ನು ಅನುಭವದಿಂದ ವಂಚಿತಳನ್ನಾಗಿ ಮಾಡುವುದಕ್ಕೆ ಸಹಸ್ರ ಅಡೆತಡೆಗಳಿವೆ. ಅವೆಲ್ಲವೂ ಮನುಷ್ಯನಿಂದ ಕೃತಕವಾಗಿ ನಿರ್ಮಿತವಾದವು. ಈ ಅಡೆತಡೆಗಳಿಗೆ ಎಷ್ಟೋ ಸಲ ಹೆಂಗಸಿನ ಮೂಲ ಶಕ್ತಿಯನ್ನು ಎದರಿಸುವ  ಶಕ್ತಿ ಇಲ್ಲ. ಆಗ ಅವು ಗಂಡಸಿನ ಮನಸ್ಸನ್ನು ಹಿಡಿದು ನೂರಾರು ಭಯಭೂತಗಳನ್ನು ಬಿತ್ತುತ್ತವೆ. ನಮ್ಮ ಕೆಲವು ಸ್ವರೂಪಗಳಿಗೆ ಮೈಲಿಗೆಯ ಆರೋಪ ಹೊರಿಸಿ ಹೆಂಗಸ್ಸನ್ನು ವಂಚಿಸುವ ಪ್ರಯತ್ನ ನಡೆದೇ ಇದೆ. ಗಂಡಸರು ಹೆಂಗಸರಿಗಿಂತಾ ಎಷ್ಟಾದರೂ ದುರ್ಬಲರು.

ಅವಳ ಮೂಲ ಗುಣವೇ ಚೀತನವಾದುದು. ಪ್ರಕೃತಿಯ ಮನ ತುಂಬುವ ವನಶ್ರೀ, ಕಣ್ಣನ್ನು ಸಂತೃಪ್ತಿಗೊಳಿಸುವ ಸುಂದರ ದೃಶ್ಯಗಳು, ಚರಾಚರ ಜೀವಿಗಳಿಗೆ ಅನ್ನವೀಯುವ ಅವಳ ವಿಶಾಲ ವಿಸ್ತಾರ, ಇವುಗಳಿಗೆ ಯಾವ ಧರ್ಮವೂ ವ್ಯಧವ್ಯದ ಸೋಂಕು ತಗುಲಿಸಬಾರದು.
ಎಂದಿಗೂ ನಾವು ಕೃತಕ ಅಡೆತಡೆಗಳನ್ನು ನಂಬಿ ಅವಳನ್ನು ವಿಮುಕ್ತಳನ್ನಾಗಿಸಬಾರದು.
ವಿಮುಖತೆ ಪ್ರಕೃತಿಯ ಗುಣವಲ್ಲ!

ಪ್ರಕೃತಿಯ ಅಂದರೆ ಹೆಣ್ಣಿನ ಮೂಲ ಗುಣವನ್ನು ಕೃತಕವಾಗಿ ತಡೆಹಿಡಿಯುವ ಧರ್ಮ, ನೀತಿ, ರಾಜಶಾಸನ, ಸಮಾಜ ನಿಯಮ, ಜನತೆಯ ಆರೋಪ, ಇವೆಲ್ಲವೂ ಅಸತ್ಯದ ಮುಖಗಳು. ಹೆಣ್ಣಿನ ಸುಂದರ ಸ್ವರೂಪವನ್ನು ತುಳಿಯಲೆತ್ನಿಸುವ ಧರ್ಮವು ತನಗೆ ತಾನೇ ನಾಶವಾಗುತ್ತದೆ."

 ಭಹುಶಹ ಈ ವಿಷಯದ ಬಗ್ಗೆ ಇದಕ್ಕಿಂತಲೂ ಅರ್ಥಪೂರ್ಣವಾಗಿ ಬರೆಯಲು ಯಾರ ಕಯ್ಯಿಂದಲೂ ಕಷ್ಟವಾದೀತು.
ನಮ್ಮಲ್ಲಿರುವ ದ್ಹೌರ್ಬಲ್ಯಗಳನೆಲ್ಲಾ ಸರಿದೂಗಿಸಿ ಹೊಸ ಕಲ್ಪನೆಗಲೊಡನೆ, ಹೊಸ ಕನಸಿನೊಂದಿಗೆ ಮತ್ತೆ ಹೊಸ ಸಮಾಜವೊಂದನ್ನು ಮುಂದಿನ ಪೀಳಿಗೆಗೆ ಕಟ್ಟೋಣವೆಂದು ಕೋರುತ್ತಾ ನನ್ನ ಮಾತನ್ನು ಮುಗಿಸುತ್ತೇನೆ...